“ಈ ಡೈರೆಕ್ಟರ್ರು ತಮ್ಮ ಸಿನಿಮಾಗಳಿಗೆ ಒಳ್ಳೊಳ್ಳೇ ಹೆಸರಿಡ್ತಾರೆ ಹೀಗೆ ನಿರ್ದೇಶಕರನ್ನು ಹೊಗಳಿದ್ದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಶಿವಣ್ಣನಿಂದ ಹೀಗೆ ಹೊಗಳಿಸಿಕೊಂಡ ನಿರ್ದೇಶಕ ಗುರುದೇಶಪಾಂಡೆ.
ಚಿರಂಜೀವಿ ಸರ್ಜಾ ಮತ್ತು ರಾಧಿಕಾ ನಟಿಸಿರುವ, ಗುರುದೇಶಪಾಂಡೆ ನಿರ್ದೇಶನದ ‘ರುದ್ರತಾಂಡವ ಚಿತ್ರದ ಹಾಡುಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ ಶಿವರಾಜ್ ಕುಮಾರ್ ‘ಗುರುದೇಶಪಾಂಡೆ ವಾರಸ್ದಾರ, ರಾಜಾಹುಲಿ ಎನ್ನುವ ಹೆಸರಿಟ್ಟಿದ್ದರು. ಈ ಬಾರಿ ರುದ್ರತಾಂಡವ ಎನ್ನುವ ಪವರ್ಫುಲ್ ಟೈಟಲ್ ಇಟ್ಟಿದ್ದಾರೆ. ಎಂದು ಗುರುದೇಶಪಾಂಡೆ ಅವರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾತ್ರವಲ್ಲದೆ, ಹರಿಕೃಷ್ಣ ಸಂಗೀತ ನಿರ್ದೇಶನದ ಹಾಡುಗಳೆದಂದರೆ ತಮಗೆ ತುಂಬಾ ಪ್ರಿಯವಾಗುತ್ತವೆ. ಹರಿಕೃಷ್ಣ ಹಾಕುವ ಟ್ಯೂನ್ಗಳು ಸರಳವಾಗಿದ್ದು ಸಾಹಿತ್ಯ ಸ್ಪಷ್ಟವಾಗಿ ಕೇಳಿಸುವಂತಿರುತ್ತವೆ ಎಂದ ಶಿವಣ್ಣ, ರುದ್ರತಾಂಡವ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಹಾಡಿರುವ ಹಾಡನ್ನು ಅಪಾರವಾಗಿ ಮೆಚ್ಚಿಕೊಂಡರು.